ನೂರು ನಾಳೆಗಳ ನಡುವೆ ನಿಂತು
ಹೇಳ ಹೊರಟಿದೆ ಕಾಣದ ಕವನ
ಮೂರು ದಿನಗಳ ನಡುವಲಿ ಕೂತು
ಕಟ್ಟದೆ
ಕೆಡವಿತೇ ಆ ಗೋಪುರವ?
ಒಂದು ಹಾಳೆಯಲಿ ನೂರು ಅರ್ಥದಲಿ
ಮೂರು ಹೊತ್ತಿನಲಿ ನಿನ್ನ ಪಕ್ಕದಲಿ
ಮುಂಜಾನೆಯ
ರವಿಯ ಮುಳುಗಿದ ಕಿರಣದಲಿ
ಯಾರ ಭಾವದಲಿ ಯಾವ ಅರ್ಥದಲಿ?
ಬಂದ ದಾರಿಯಲಿ ಬಂಧ ಬಂದಾಗ
ದೂರ ಕಾಣದೇ ದೂರವ ದೂರುತಲಿ
ಹೊರಟೆನೆಂದು
ಬೆಂದು ಕೂತಿರುವೆ
ಯಾವ ಬಂಧವ ತೊರೆದು ನೀನಿಲ್ಲಿ
ಬಂದಿರುವೆ?
ಮಲ್ಲಪ್ಪ
No comments:
Post a Comment