Friday, February 13, 2015

ಸುಮ್ಮನೆ ಗೀಚಿದ್ದು

 






ಬೆರಳತುದಿಯ ತೊಳಲಾಟವ ತಡೆದು
ಮನವೆಕೊ ಸುಯ್ಯುತಿದೆ ಸಾವಿರ ಮಾರು
ತನ್ನೊಳಗಿನ ಕನಸುಗಳನು ಬಾನೆತ್ತರಕೆ ಚಿಮ್ಮಿ
ಆರ್ಭಟಕ್ಕೆ ತತ್ತರಿಸದಿರಲಿ ನೆಚ್ಚಿನ ನಾವೇ


ಮಕರಂದದ ಹುಡುಕಾಟದಲಿ ದುಂಬಿಯ ಮನಸು
ದೇವರ ಪಾದವ ಸೇರುವೆನೆಂಬ ಹೂವ್ವಿನ ಕನಸು
ಅರಿಯದ ದಾರಿಯ ದೂರವನು ಬೆನ್ನಟ್ಟಿ
ಸಮಯದ ನೆರೆಯಲಿ ಹೋಗದಿರಲಿ ಕೊಚ್ಚಿ


ಮನಸಿನೊಳು ನೂರು ಆಲೋಚನೆಗಳ ವರತೆ
ಹೆಜ್ಜೆಗೊಂದು ಸಿಗುತಿಹುದು ಕಹಿನೀರ ಕಂತೆ
ಕೊನೆಗೊಮ್ಮೆ ತಿಳಿದಾಗ ಕಾಡಿತು ಚಿಂತೆ
ಕೂರಲು ಜಾಗವಿಲ್ಲದಷ್ಟು ಗುಂಡಿಗಳ ಸಂತೆ


ಹೋಗದೆ ಬಾರದು ಬರದೇ ಹೋಗದು
ಬಂದಾಗ ಸಿಗದು ಸಿಕ್ಕಾಗ ಬರದು
ಹೊಕ್ಕು ಹುಡುಕಿದಾಗ ಪೋಳ್ಹೆಣಿಸದಿರದು
ಲೆಕ್ಕವ ಹಾಕಿದರು ಲೆಕ್ಕಕ್ಕೆ ಸಿಗದು






-ತಿಳಿದಿದ್ದು
ಮಲ್ಲಪ್ಪ


 

No comments:

Post a Comment